ಬುಧವಾರ, ಫೆಬ್ರವರಿ 21, 2018

ನಿಮಗಿದು ಗೊತ್

*==ಜ್ಞಾನ ಮಂದಿರ==*
 
      *ನಿಮಗಿದು ಗೊತ್ತೆ*
           °°°°°°°°°°°°°
*1- "ಚಿಲ್ಕ"ಮತ್ತು "ಪುಲಿಕಾಟ್" ಸರೋವರಗಳು ಉಪ್ಪು ನೀರಿನ ಸರೋವರಗಳು ಹಾಗೂ "ದಾಲ್" ಮತ್ತು "ನಲ್" ಸರೋವರಗಳು ಸಿಹಿನೀರಿನ ಸರೋವರಗಳು*
===================
*2- ಅಪಾರವಾದ ಜನಸಂಖ್ಯೆ ಪೋಷಣೆ ಹಾಗೂ ಬಳಕೆಗಾಗಿ 1985 ರಲ್ಲಿ ಪ್ರತ್ಯೇಕವಾದ ಕೇಂದ್ರ ಮಂತ್ರಾಲಯವನ್ನು ರಚಿಸಲಾಗಿದೆ. ಇದನ್ನು "ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ" ಎಂದು ಕರೆಯಲಾಗುತ್ತದೆ*
================
*3- ಎರಡು ನದಿಗಳ ನಡುವಿನ ಪ್ರದೇಶವನ್ನು "ದೋ-ಅಬ್" ಎನ್ನುತ್ತಾರೆ. ಉದಾ: ಗಂಗಾ-ಯಮುನ ದೋ-ಅಬ್*
=================
*4-"ಹೊನ್ನಮ್ಮ "ಎಂಬುವವರು 2ನೇ ದೇವರಾಯನ ಆಸ್ಥಾನದಲ್ಲಿ ವರದಿಗಾರಳಾಗಿದ್ದಳು .ವಿಜಯನಗರ ಕಾಲದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಕುಸ್ತಿ. "ಹರಯಕ್ಕ"  ಎಂಬುವವರು ಆ ಕಾಲದ ಖ್ಯಾತ ಮಹಿಳಾ ಕುಸ್ತಿಪಟು*
================
*5- "ಆಮೆರಗೋ ವೆಸ್ಪುಸಿ" ಎಂಬುವನು ಅಮೆಜಾನ್ ನದಿ ಮುಖ ಶೋಧಿಸಿ ಇದೊಂದು ಹೊಸ ಖಂಡವೆಂದು ತೋರಿಸಿದನು.ಅದರಿಂದ ಇದಕ್ಕೆ ಅಮೆರಿಕ ಎಂಬ ಹೆಸರು ಬಂದಿತು*
===============
*6- ಕರ್ನಾಟಕ, ಉತ್ತರಪ್ರದೇಶ,ಆಂದ್ರಪ್ರದೇಶದ ರಾಜ್ಯಗಳು "ದ್ವಿಸದನ"  ಹೊಂದಿದ್ದರೆ, ತಮಿಳುನಾಡು, ಪಶ್ಚಿಮಬಂಗಾಳ ,ಅಸ್ಸಾಂ, ಅರುಣಾಚಲಪ್ರದೇಶ ರಾಜ್ಯಗಳು "ಏಕಸದನವನ್ನು " ಹೊಂದಿದೆ*
=================
*ಆಡಳಿತ ದೃಷ್ಟಿಯಿಂದ ಕರ್ನಾಟಕವು ನಾಲ್ಕು ವಿಭಾಗಗಳನ್ನು ಹೊಂದಿದೆ.1-ಬೆಂಗಳುರು.2- ಮೈಸೂರು.3-ಕಲಬುರಗಿ .4- ಬೆಳಗಾವಿ*
==================
7- * *ಸೇಂಟ್ ಮೇರೀಸ್ ದ್ವೀಪವನ್ನು ಸ್ಥಳೀಯ "ತೋನೆಪಾರ್ "ಎಂದು ಕರೆಯಲಾಗುತ್ತಾರೆ.*
* *ಮುರುಡೇಶ್ವರ ಸಮೀಪದ "ನೇತ್ರಾಣಿ" ದ್ವೀಪವಿದೆ .ಇಲ್ಲಿ ಪಾರಿವಾಳ ಅಧಿಕವಾಗಿರುವುರಿಂದ ಇದನ್ನು "ಪಿಜಿನ್ ಐಲ್ಯಾಂಡ್" ಎಂದು ಕರೆಯುತ್ತಾರೆ*
=================
*8-ಬಾಬಾಬುಡನ್ ಗಿರಿಯ ಮತ್ತೊಂದು ಹೆಸರು "ಚಂದ್ರದ್ರೋಣ ಪರ್ವತ".*
=================
*9- ಪೆನ್ನಾರ್ ನದಿಗೆ ಮತ್ತೊಂದು ಹೆಸರು "ಪಿನಾಕಿನಿ" ತಮಿಳುನಾಡಿನ ದಕ್ಷಿಣ ಪೆನ್ನಾರ್ ನದಿಯನ್ನು, ( ದಕ್ಷಿಣ ಪಿನಾಕಿನಿ) ಪೊನೈಯರ್ ಎಂದು ಕರೆಯುತ್ತಾರೆ*
================
*10-ಕರ್ನಾಟಕ ಮೊಟ್ಟಮೊದಲ ದೊಡ್ಡ ಜಲಾಶಯ "ವಾಣಿವಿಲಾಸ ಸಾಗರ" 1907 ರಲ್ಲಿ ಹಿರಿಯೂರು ಬಳಿ ನಿರ್ಮಿಸಲಾಯಿತು. ಇದನ್ನು "ಮಾರಿಕಣಿವೆ ಯೋಜನೆ" ಎಂದೂ ಕರೆಯುತ್ತಾರೆ*
================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ