ಸೋಮವಾರ, ಮಾರ್ಚ್ 19, 2018

ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ ಗೌರವ ಪ್ರದಾನ

*##ಮಾಹಿತಿ ವೇದಿಕೆ##*

  *ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ, ಗೌರವ ಪ್ರಶಸ್ತಿ ಪ್ರದಾನ*
###############
*ಬೆಂಗಳೂರು,ಮಾ.19: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಸಾಹಿತಿ, ಲೇಖಕರಿಗೆ 2017ರ ಸಾಲಿನ 'ಗೌರವ', 'ಸಾಹಿತ್ಯ ಶ್ರೀ' ಪ್ರಶಸ್ತಿಗಳು ಹಾಗೂ 2016ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರದಾನ ಮಾಡಿದರು.*
#############
*ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ 2017ನೇ ಸಾಲಿನ 'ಗೌರವ', 'ಸಾಹಿತ್ಯಶ್ರೀ' ಪ್ರಶಸ್ತಿಗಳು ಹಾಗೂ 2016ನೇ ಸಾಲಿನ 'ಪುಸ್ತಕ ಬಹುಮಾನ' ನೀಡಲಾಯಿತು.*
#############
*ಈ ವೇಳೆ ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ಸಾಹಿತ್ಯದ ದೃಷ್ಟಿಕೋನದಲ್ಲಿ ಶ್ರೀಮಂತಿಕೆ ಕಂಡುಕೊಂಡು ಸಮೃದ್ದಿಯಾಗಿರಬೇಕು. ಸಾಂಸ್ಕೃತಿಕ ಕ್ಷೇತ್ರದ ಪ್ರತಿಯೊಂದು ಪ್ರಾಕಾರಗಳು ಬಡವಾಗದೆ ವಿಜೃಂಭಣೆಯಿಂದ ಇದ್ದಾಗ ಅಸ್ತಿತ್ವದಲ್ಲಿರುತ್ತದೆ.*
################
*ಅದಕ್ಕೆ ಕಾರಣರಾದ ಸಾಧಕರನ್ನು ಗುರುತಿಸಬೇಕಿದೆ ಎಂದರು.*
#############
*ಹಿರಿಯರು ಯಾರೊಬ್ಬರು ಪ್ರಶಸ್ತಿ ಕೇಳುವುದಿಲ್ಲ. ಅವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕಾದದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಇರುವುದನ್ನು ಮಾಡಿಕೊಂಡು ಹೋಗುವುದಕ್ಕಿಂತ ಹೊಸದನ್ನು ಗುರುತಿಸಿ ಸಾಧನೆಗೈಯಬೇಕು ಎಂದು ಉಮಾಶ್ರೀ ಹೇಳಿದರು.*
###############
*ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಡಾ. ಅರವಿಂದ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ, ರಿಜಿಸ್ಟ್ರಾರ್ ಸಿದ್ದರಾಮ್ ಸಿಂಧೆ ಉಪಸ್ಥಿತರಿದ್ದರು.*
=================
*ಗೌರವ ಪ್ರಶಸ್ತಿ ಪುರಸ್ಕೃತರು: *
•••••••••••••••••••
> *ಬನ್ನಂಜೆ ಗೋವಿಂದಾಚಾರ್ಯ*
> *ಪ್ರೊ. ಸೋಮಶೇಖರ್ ಇಮ್ರಾಪುರ*
>  *ಪ್ರೊ.ಎಚ್.ಜೆ. ಲಕ್ಕಪ್ಪಗೌಡ,*
> *ಪ್ರೊ.ಎನ್.ಎಸ್ ಲಕ್ಷ್ಮಿನಾರಾಯಣ ಭಟ್ಟ,*
> *ಕಸ್ತೂರಿ ಬಾಯರಿ.*
==============
*ಸಾಹಿತ್ಯ ಶ್ರೀ ಪ್ರಶಸ್ತಿ: *
••••••••••••••••••••••
> *ಪ್ರೊ. ಧರಣೇಂದ್ರ ಕುರಕುರಿ*
    > *ಫಕೀರ್ ಮುಹಮ್ಮದ್ ಕಟ್ಪಾಡಿ*
> *ಡಾ. ವಿಜಯಶ್ರೀ ಸಬರದ* > *ಡಾ.ವಿ. ಮುನಿವೆಂಕಟಪ್ಪ* > *ಡಾ. ನಟರಾಜ್ ಹುಳಿಯಾರ್*
> *ಡಾ.ಕೆ.ಕೇಶವಶರ್ಮ*
> *ಡಾ.ಕರೀಗೌಡ ಬೀಚನಹಳ್ಳಿ*
> *ಪ್ರೊ. ತೇಜಸ್ವಿ ಕಟ್ಟೀಮನಿ* > *ಡಾ. ಕಮಲಾ ಹೆಮ್ಮಿಗೆ*
> *ಕಂಚ್ಯಾಣಿ ಶರಣಪ್ಪ.*
================
*ಪುಸ್ತಕ ಬಹುಮಾನ ಪುರಸ್ಕ್ರತರು:*
••••••••••••••••
> *ಕೃಷ್ಣಮೂರ್ತಿ ಬಿಳಿಗೆರೆ*
> *ಬಸವರಾಜ್ ಹೃತ್ಸಾಕ್ಷಿ*
> *ರೇಖಾ ಕಾಖಂಡಕಿ*
> *ಜಯಪ್ರಕಾಶ್ ಮಾವಿನಕುಳಿ*
> *ಸುಧೀರ್ ಅತ್ತಾವರ್*
> *ಬಿ.ವಿ. ಭಾರತಿ*
> *ಡಾ.ಬಿ.ಎಸ್. ತಲ್ವಾಡಿ*
> *ಪ್ರೀತಿ ನಾಗರಾಜ್*
> *ಡಾ.ಎಸ್. ನಟರಾಜ್ ಬೂದಾಳು*
> *ಡಾ. ವೀರೇಶ ಬಡಿಗೇರ*
> *ನಿರ್ಮಲಾ ಸುರತ್ಕಲ್*
> *ಡಾ.ಎ.ಎಸ್. ಕುಮಾರಸ್ವಾಮಿ*
> *ಡಾ. ಸಣ್ಣರಾಮ*
> *ಡಾ. ಶರತ್ ಚಂದ್ರಸ್ವಾಮಿ* > *ಎ.ಆರ್. ಮಣಿಕಾಂತ್*
> *ಹ.ಚ.ನಟೇಶ ಬಾಬು*
> *ಎಂ. ಅಬ್ದುಲ್ ರೆಹಮಾನ್ ಪಾಷ*
> *ರಾಜೇಶ್ವರಿ ತೇಜಸ್ವಿ ಮತ್ತು ಶಾಂತಿ ಕೆ. ಅಪ್ಪಣ್ಣ.*
==============
*ದತ್ತಿ ಬಹುಮಾನಿತರು: *
••••••••••••••••••••••••
> *ಚೈತ್ರಿಕಾ ಶ್ರೀಧರ್ ಹೆಗಡೆ* > *ಮುಹಮ್ಮದ್ ಕುಳಾಯಿ* > *ಡಾ. ಗುರುಪಾದ ಕೆ. ಹೆಗಡೆ ಎಸ್. ಶಿವಾನಂದ* > *ಸ.ರಘುನಾಥ*
>  *ಡಾ.ಕೆ.ಬಿ. ಶ್ರೀಧರ್*
> *ರಶ್ಮಿ ತೇರದಾಳ*
==================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ